ಕಲಿಕೆ ಎಂಬುದು ಸಹಜ ಪ್ರಕ್ರಿಯೆ ಎಂಬ ಮಾತುಗಳು ಎಲ್ಲೆಡೆಯೂ ಕೇಳುತ್ತೆವೆ. ಮನುಷ್ಯ ಹುಟ್ಟಿನಿಂದ ಚಟ್ಟದವರೆಗೂ ಕಲಿಯುತ್ತಲೆ ಅನೇಕ ಹೊಸ ಹೊಸ ಅನುಭವಗಳು ಪಡೆಯುತ್ತಿರುತ್ತಾನೆ. ಹಾಗಾದರೇ ಕಲಿಯುವುದು ಅಷ್ಟೊಂದು ಸುಲಭವೇ? ಎಂಬ ಪ್ರಶ್ನೆ ನಮ್ಮ ಮನದಲ್ಲಿ ಮೂಡಿದಾಗ ನಾವು ಸಹಜವಾಗಿ ಉತ್ತರಿಸಲು ತಡವರಿಸುತ್ತೆವೆ. ಅಂದಂತೆ ಕಲಿಕೆ ಕಲಿಯಕ್ಕಾಗದಷ್ಟು ಹೆಮ್ಮರವಲ್ಲ, ಜೊತೆಗೆ ಹಗುರವಾಗಿ ಸ್ವೀಕರಿಸಿದವರಿಗೆ ಸುಲಭವೂ ಕೂಡ ಅಲ್ಲ ಎಂಬುದು ಹೇಳುವ ಚಿಕ್ಕ ಪ್ರಯತ್ನ ಈ ಲೇಖನದಲ್ಲಿ ಮಾಡಿರುವೆ.
ನಾನು ಒಬ್ಬ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದು, ಪ್ರಸ್ತುತ ಬೀದರ್ ಜಿಲ್ಲೆಯ ಗಡಿ ತಾಲೂಕು ಔರಾದನಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿರುವೆ. ಎಲ್ಲೆಡೆ ಕೋವಿಡ್-19 ಕಾರ್ಮೋಡ ಆವರಿಸಿಕೊಂಡ ಪ್ರಯುಕ್ತ ಶಾಲಾ ಪ್ರಾರಂಭ, ಮಕ್ಕಳ ಕಲಿಕೆ ಸೇರಿದಂತೆ ಹತ್ತಾರು ಪ್ರಶ್ನೆಗಳು ಎನಗೆ ಕಾಡಲಾರಂಭಿಸಿರುವುದಂತೂ ನಿಜ. ಆದರೇ ಮಕ್ಕಳ ಕಲಿಕೆಗೆ ನಾನು ಮಾಡುವುದಾದರೂ ಏನು? ಶಾಲೆಗಳು ಆರಂಭವಾಗದೇ ಮಕ್ಕಳಿಗೆ ಕಲಿಸುವುದಾದರೂ ಹೇಗೆ? ಹೀಗೆ ಹತ್ತಾರು ಪ್ರಶ್ನೆಗಳು ಕಾಡುತ್ತಲಿದ್ದು, ಅವುಗಳ ಪರಿಹಾರಕ್ಕಾಗಿ ಸಮರ್ಪಕ ದಾರಿ ಹುಡುಕಬೇಕಿರುವುದು ಈಗೀನ ಅನಿವಾರ್ಯ ಎಂದು ಭಾವಿಸಿದ್ದೆ.
ಇದರ ಮಧ್ಯೆದಲ್ಲಿ ಆಯುಕ್ತಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ವತಿಯಿಂದ ಒಂದು ಅದ್ಭುತವಾದ ಯೋಜನೆ ಹಾಕಿಕೊಂಡು ಪ್ರತಿ ಶಿಕ್ಷಕರಿಗೂ ನಿರ್ದೀಷ್ಟವಾದ ಟಾಸ್ಕ್ ನೀಡಿ, ಪ್ರತಿಯೊರ್ವ ಶಿಕ್ಷಕ ತನ್ನ ಶಾಲೆಗೆ, ಶಾಲಾ ಮಕ್ಕಳಿಗೆ ತಕ್ಕಂತೆ Student Profile, School Development Plan, Case Study, Book Review, Article on Education, Exposure to the latest e-learning ಹೀಗೆ ಆರು ವಿಷಯಗಳಿಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುವಂತೆ ತಿಳಿಸಲಾಯಿತು. ಕೆಲಸ ನೀಡಿದ ತಕ್ಷಣ ಅದೆಷ್ಟೋ ಶಿಕ್ಷಕರು ಈ ಕೆಲಸದಿಂದ ಬೇಸರವಾಗಿ ನನಗೆ ಕರೆ ಮಾಡಿದ್ದು ಉಂಟು, ಇನ್ನು ಅದೆಷ್ಟೋ ಶಿಕ್ಷಕರು ಈ ನೆಪದಲ್ಲಿ ಕನಿಷ್ಟ ಒಂದಿಷ್ಟು ಪುಸ್ತಕಗಳು ಓದಲು ಅವಕಾಶ ದೊರೆತಂತಾಯಿತು ಎಂಬ ಸಮಾಧಾನವು ಕೂಡ ವ್ಯಕ್ತಪಡಿಸಿದ್ದು ಕಂಡೆ.
ಇದಕ್ಕೆ ಪೂರಕವಾಗಿ ಅನೇಕ ಶಿಕ್ಷಕರು ತಮಗೆ ವಹಿಸಿದ ಕೆಲಸಗಳು ಇಷ್ಟದಿಂದಲೋ ಅಥವಾ ಕಷ್ಟದಿಂದಲೋ ಮಾಡಿರುವುದು ಕಂಡು ಬಂತಾದರೂ ಇದರಿಂದ ಶಿಕ್ಷಕರ ಮೂಲ ಕೆಲಸಕ್ಕೆ ಅಣಿಯಾಗಿಸಿ ಪ್ರೇರಣೆ ಜ್ಯೋತಿ ಬೆಳಗಿದ ಇಲಾಖೆಯ ನಡೆ ಅವಿಸ್ಮರಣೀಯ. ಇಷ್ಟಕ್ಕೆ ಮುಗಿತು ಎನ್ನುವಷ್ಟರಲ್ಲಿಯೇ ಶುರುವಾಯ್ತು ಮತ್ತೊಂದು ತಳಮಳ. ಅದೇನಂತಿರಾ? ಕೊರೋನಾ ಮಹಾಮಾರಿಯ ಅಟ್ಟಹಾಸದಿಂದ ಶಾಲಾ ಪ್ರಾರಂಭಕ್ಕೆ ವಿಘ್ನ ಎಂಬ ಸಂದೇಶ.
ಕಳೆದ ಜನವರಿಯಿಂದಲೇ ದೇಶದಲ್ಲಿ ಪ್ರವೇಶಿಸಿದ ಈ ಕೊರೋನಾ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತ ಸಾಗಿರುವುದರಿಂದ ಶಾಲೆಗಳು ಆರಂಭವಾಗಿಲ್ಲದಿರುವುದು ಕಂಡು ಕಲಬುರಗಿ ಆಯುಕ್ತಾಲಯ ಮತ್ತೊಂದು ಸಾಹಸಕ್ಕೆ ಕೈ ಹಾಕಿತ್ತು. ಪ್ರಾರಂಭದಲ್ಲಿ ನಲಿ-ಕಲಿ ಶಿಕ್ಷಕರಿಗಾಗಿ ಆರಂಭಿಸಿದ ವೆಬಿನಾರ್ ತರಬೇತಿ ಇಂದು ಶಿಕ್ಷಕ ಸಮೂಹವನ್ನೇ ಮುನ್ನೆಲೆಗೆ ತಂದಿರುವುದು ಅಕ್ಷರಶಃ ಸತ್ಯವಾದ ಮಾತು.
ಮಾನ್ಯ ಅಪರ ಆಯುಕ್ತರು, ನಿರ್ದೇಶಕರು, ಉಪನಿರ್ದೇಶಕರು(ಯೋಜನೆ) ಸೇರಿದಂತೆ ಹತ್ತಾರು ಅಧಿಕಾರಿ ವರ್ಗದವರು ಸೇರಿಕೊಂಡು ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಮಾದರಿ ಎನ್ನುವಂತೆ ಮೇ ಅಂತ್ಯಕ್ಕೆ ಅಂದಾಜು ಕಲಬುರ್ಗಿ ವಿಭಾಗದ ವಿವಿಧ ಜಿಲ್ಲೆಗಳಾದ ಬೀದರ, ಕಲಬುರ್ಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ ಮತ್ತು ರಾಯಚೂರಿನ ಸುಮಾರು 22 ಸಾವಿರ ಶಿಕ್ಷಕರಿಗೆ ಇಲಾಖೆ, ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗದೇ ತರಬೇತಿ ನೀಡಲು ಸಾಧ್ಯವಾಗಿರುವುದು ಈ ಕೊರೋನಾ ವೈರಾಣುವಿನಿಂದ ಎಂಬುದು ಅಲ್ಲಗಳೆಯುವಂತಿಲ್ಲ.
ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಲೇ ಪ್ರತಿ ವಿಭಾಗದ (ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ) ಶಿಕ್ಷಕರಿಗೆ ಬೇಕಾದ ಅಗತ್ಯ ಪುನಶ್ಚೇತನ ತರಬೇತಿಗಳು ನೀಡಿರುವುದು, ಪ್ರಸ್ತುತ ನೀಡುತ್ತಲಿರುವುದು ಸಮಯದ ಸದುಪಯೋಗ ಎನ್ನದೇ ಬೇರೆನೂ ಎನ್ನಲಾಗದು. ಈ ಸಂದರ್ಭದಲ್ಲಿ ನಾನು ಹತ್ತಾರು ಹೊಸ ಕೆಲಸಗಳು ಕಲಿತು ಮುನ್ನಡೆದಿರುವುದು ನನ್ನ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಯಾವತ್ತಿಗೂ ಮರೆಯಕ್ಕಾಗುವುದಿಲ್ಲ.
ವೆಬಿನಾರ್ ತರಬೇತಿಯ ಆಯೋಜನೆ :
ವೆಬಿನಾರ್ ಎಂಬ ಪದದ ಅರ್ಥವೇ ಗೊತ್ತಿರದ ನನಗೆ ತಾಲೂಕಿನ ಎಲ್ಲ ಶಿಕ್ಷಕರಿಗೆ ತರಬೇತಿಯ ಆಯೋಜನೆಗೆ ಅಣಿಯಾಗುವಂತೆ ಮೇಲಾಧಿಕಾರಿಗಳು ಸೂಚಿಸಿದಾಗ ಇದೆನಪ್ಪ ಮಾಡುವುದು ಅಂತ ಭಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಚ್.ಟಿ ಮಂಜುನಾಥ ಸರ್ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಸಂತೋಷಕುಮಾರ ಪೂಜಾರಿ ಅವರ ಧನಾತ್ಮಕ ಪ್ರೋತ್ಸಾಹದಿಂದ ಮೊದಲ ತರಬೇತಿ ಮಾಡಿ ಮುಗಿಸಿದೆ.
ಅಷ್ಟೋತ್ತಿಗೆ ಲಿಂಕ್ ಮೂಲಕ ತರಬೇತಿಯಲ್ಲಿ ಭಾಗವಹಿಸುವ ಮತ್ತು ಕೆಲ ಆನ್ಲೈನ್ ಸಭೆಗಳಿಗಾಗಿ ಬಳಸುವ ಆ್ಯಪ್ ಗಳ ಬಗ್ಗೆ ಮಾಹಿತಿ ದೊರೆಯಿತು. ಮುಂದುವರೆದು ಕೆಲವು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ ಮಾಡಿರುವ ಹಿನ್ನೆಲೆ ಹೊಸ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಯಿತು.
ಶಾಲಾ ಅಭಿವೃದ್ಧಿ, ಮಕ್ಕಳ ಪ್ರಗತಿ ಸೇರಿದಂತೆ ಶಾಲೆಯ ಅನೇಕ ಕೆಲಸ ಕಾರ್ಯಗಳಿಗೆ ಇದು ಬಹು ಉಪಯೋಗಕಾರಿ. ಈ ಆ್ಯಪ್ ಮೂಲಕ ಶಾಲೆಯ ಮಕ್ಕಳ ಪಾಲಕ ಪೋಷಕರಿಗೆ ಪ್ರತಿ ತಿಂಗಳು ಸಭೆ ಕರೆದು ಮಕ್ಕಳ ಪ್ರಗತಿ ಮತ್ತು ಶಾಲಾ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸಮರ್ಥವಾಗಿ ಮಾಡಬಹುದೆಂಬುದನ್ನು ಅರಿತುಕೊಂಡೆ.
ನನ್ನ ವೈಯಕ್ತಿಕ ಜೀವನಕ್ಕೂ ಕೂಡ ತುಂಬ ಅನುಕೂಲವಾಗುವ ಈ ಆ್ಯಪ್ ಹೇಗೆ ಬಳಸಬೇಕು? ಎಂಬುದನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ತಾಲೂಕು ಸಮನ್ವಯಾಧಿಕಾರಿ ಡಾ. ಶಿವಾಜಿ ಬಿರಾದಾರ್ ಅವರಿಂದ ತಿಳಿದುಕೊಂಡೆ. ಕೇವಲ ರಾಜ್ಯವಲ್ಲದೇ ಹೊರ ರಾಜ್ಯದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಗೆ (SRP) ಅವರಿಗೂ ಕೂಡ ತಾಲೂಕು ಮಟ್ಟದ ತರಬೇತಿಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿ ಅವರಿಂದ ನಮ್ಮ ತಾಲೂಕಿನ ಶಿಕ್ಷಕರಿಗೆ ಬೋಧನೆಗೆ ಅನುಕೂಲವಾಗುವ ಅನೇಕ ವಿಚಾರಗಳು ಕೂಡ ಹಂಚಿಕೊಳ್ಳಲು ವಿನಂತಿಸಿದೆ. ಇದರಲ್ಲಿ ನಮ್ಮ ತಾಲೂಕಿನ ತೋರಣಾ ಸಮೂಹ ಸಂಪನ್ಮೂಲ ವ್ಯಕ್ತಿ ರೋಹಿದಾಸ ಮೇತ್ರೆ ಅವರ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಕೋವಿಡ್-19 ಆವರಿಸಿಕೊಂಡ ಹಿನ್ನೆಲೆ ತಾಲೂಕಿನ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಸಭೆಗಳು ಕೂಡ ಮಾಡುವಂತಿಲ್ಲ. ಅದಕ್ಕೂ ಕೂಡ ತುಂಬ ಲಾಭದಾಯಕವಾಗಿದೆ.
GOOGLE FORM ನ ಬಳಕೆ :
Google ಖಾತೆ ಹೊರತುಪಡಿಸಿ ಬೇರೆನೂ ಗೊತ್ತಿರದ ನನಗೆ ಈ ಸಂದರ್ಭದಲ್ಲಿ Google Forms ಯಾವ ರೀತಿ ಬಳಕೆಯಾಗುತ್ತದೆ ಎಂಬುದನ್ನು ಅರಿತು, ಪ್ರತಿಯೊಂದು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುಲು ಸಾಧ್ಯವಾಗುತ್ತಿದೆ. ಅಲ್ಲದೇ ತರಬೇತಿ ನಿರತ ಶಿಕ್ಷಕರಿಗೆ MCQ ಮಾದರಿ ಪ್ರಶ್ನಾವಳಿಗಳು ರಚಿಸಿ ಪರೀಕ್ಷೆ ಕೈಗೊಳ್ಳಲು ಸಹಾಯವಾಗಿದೆ.
ಮುಂಬರುವ ಈ ಕೋವಿಡ್-19 ನಂತಹ ಭಯಾನಕ ದಿನಗಳಲ್ಲಿ ಮಕ್ಕಳಿಗೆ ಮನೆಯಿಂದಲೇ ಪರೀಕ್ಷೆಯಲ್ಲಿ ಪಾಲ್ಗೊಂಡು ಜ್ಞಾನವನ್ನು ಸಂರಚಿಸಿಕೊಳ್ಳಲು ಸಾಧ್ಯವಾಗಿಸಬಹುದು. ಅಲ್ಲದೇ ವೈಯಕ್ತಿಕವಾಗಿಯೂ ಕೂಡ ಬಳಕೆಗೆ ಬಳಸಬಹುದು ಎಂಬುದನ್ನು ಅರಿತುಕೊಂಡೆ.
ಅಲ್ಲದೇ, Whatsapp ಮೂಲಕ ಏಕಕಾಲಕ್ಕೆ ಹಲವರಿಗೆ ಸಂದೇಶಗಳು ಕಳುಹಿಸುವುದು ಹೇಗೆ?, ಹಿಂದಿ TYPEWRITING ಮಾಡುವುದು ಹೇಗೆ?, Blogger ನ ಬಳಕೆ ಮಾಡುವುದು ಹೇಗೆ?, YOUTUBE ಖಾತೆ ಬಳಸಿಕೊಳ್ಳುವುದು ಹೇಗೆ?, ಕಲಿಕೆಗೆ ಪೂರಕವಾದ ವಿಡಿಯೋ ಮತ್ತು ಆಡಿಯೋ ಮಾಡುವುದು ಹೇಗೆ?, ಕಲಿಕೋಪಕರಣಗಳು, ಪಾಠೋಪಕರಣಗಳು ತಯಾರಿಸುವುದು ಹೇಗೆ? ಹೀಗೆ ಹತ್ತಾರು ಹೊಸ ಹೊಸ ವಿಷಯಗಳು ಅರಿತು ಮುನ್ನಡೆಯಲು ತುಂಬ ಖುಷಿಯಾಗುತ್ತಿದೆ.
ಒಟ್ಟಾರೆ ಕೋವಿಡ್-19 ಮಾಹಾಮಾರಿ ಆವರಿಸಿಕೊಂಡ ಈ ಸಂದರ್ಭದಲ್ಲಿ ವಿಪುಲ ಅವಕಾಶಗಳು ನೀಡುವ ಮೂಲಕ ನನ್ನ ವೃತ್ತಿನೈಪುಣ್ಯತೆ ಹೆಚ್ಚಿಸಿಕೊಳ್ಳಲು ಅವಕಾಶ ಒದಗಿಸಿದ ಕಲಬುರ್ಗಿ ವಿಭಾಗದ ಮಾನ್ಯ ಆಯುಕ್ತರು, ನಿರ್ದೇಶಕರು, ಉಪನಿರ್ದೇಶಕರು (ಯೋಜನೆ), ಉಪನಿರ್ದೇಶಕರು (ಆಡಳಿತ), ಬೀದರ, ಡಯಟ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿ ವರ್ಗದವರಿಗೂ, CRP, BRP, ECO ಮತ್ತು ಶಿಕ್ಷಕ ಬಾಂಧವರಿಗೆ ಅನಂತಾನಂತ ಧನ್ಯವಾದಗಳು.
- - ಬಿಎಂ ಅಮರವಾಡಿ
Good writting Amarwadi ji...
ReplyDeleteThanq Sir.
DeleteWell expressed experience.
ReplyDeleteನಿಮ್ಮ ಪ್ರತಿಭೆ ಅನಾವರಕ್ಕೆ ಇದು ಒಂದು ಉತ್ತಮ ವೇದಿಕೆ ಆಗಿದೆ, ನಿಮ್ಮ ಪ್ರತಿಭೆ ಹೀಗೆ ಬೆಳಗಲಿ
ReplyDeleteThanq Sir.
Deleteಬಹಳ ಸುಂದರವಾಗಿ ಮೂಡಿಬಂದಿದೆ.
ReplyDeleteಬಹಳ ಸುಂದರ ವಾಗಿಮೋಡಿಬಂದಿದೆ.ಸರ್
ReplyDeleteSuper sir
ReplyDeleteಅರ್ಥಪೂರ್ಣವಾಗಿದೆ
ReplyDeleteಲೇಖನ ತುಂಬ ಉತ್ತಮವಾಗಿದೆ.
ReplyDeletevery nice article sir u become a best Rp and ankar,im very proud of u when u writing small book :Amarwadi;aurad village history i understand u become oneday u are successful person sir all the best our bless all time with u sir namste
ReplyDeleteThanq..
ReplyDelete